ಬಂಧನ

ಈ ಸಲಾರೆ ಇನ್ನು ನಾನು; ಕಾಣಲಾರೆ ಮುನ್ನು
ಕಡಲ ನಡುವೆ ಈಸಿದೆ
ತುದಿ‌ಇಲ್ಲ, ಮೊದಲಿಲ್ಲ; ಮಾಡಲೇನು ಇನ್ನು
ದಣಿದು ನಾನು ಬಳಲಿದೆ

ಏಸು ಕಾಲ ಈಸಿದೆ! ಎನಿತು ದಿನ ನೂಕಿದೆ!
ಮುಗಿಯ ಬಹುದೆ ಕಡಲು?
ಮುಗಿಯಲಿಲ್ಲ ತಿಳಿಯಲಿಲ್ಲ; ಕೈಯಬೀಸಿದೆ
ಇನ್ನು ತಾಳದೆನ್ನ ಒಡಲು

ಹಿರಿಯ ಕಿರಿಯ ತೆರೆಗಳೆಲ್ಲ ಹಿಂದೆ ಹಾಕಿದೆ
ಹೃದಯ ಮುಂದೆ ಚಾಚಿದೆ
ಕಣ್ಣು ಕಂಡ ದೂರವನ್ನು ಎಲ್ಲೋ ದಾಟಿದೆ
ಇನ್ನು ಮುಂದೆ ಹಾರಿದೆ

ಬೀಸುಗಾಳಿ ಬಿರುಗಾಳಿ ಎಲ್ಲ ಸಹಿಸಿದೆ
ತೋಳ ಬೀಸಿ ಮತ್ತೆ ಈಸಿದೆ
ಗಗನ ಮೇಲೆ ನೀರು ಕೆಳಗೆ; ಮುಂದೋಡಿದೆ
ಅರಿಯದ ಗುರಿಯತ್ತ ಸಾಗಿದೆ

ಎನಿತೊ ಏನೋ ಈಸಿ ಬಂದೆ. ಇನ್ನೇನು ಮು೦ದೆ?
ಕಿರಿಯ ತೋಳು ಸಹಿಸಬಹುದೆ?
ಎನಿತೊ ತೆರೆಯನೇರಿ ಅಳಲ ತಾಳದಾದೆ
ನನ್ನ ಗುರಿಯ ದಾರಿ ಅರಿಯದೆ ಹೋದೆ

ನಿಂತರೆ ಮರಣ, ನಡೆದರೆ ನರಕ ವೇದನ
ಅಯ್ಯೊ ವಿಧಿಯ ಬಾಧನ !
ಯಾರು ಇಲ್ಲ ಇಲ್ಲಿ ಎನಗೆ ಕೇಳಲೆನ್ನ ಕ್ರಂದನ
ಯಾರೆನಗೆ ಬಿಡಿಸಲೀ ಬಂಧನ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಡೆ
Next post ಏನು ಪೋಸು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys